Advt. 
 Views   280
Oct 11 2024 7:05PM

ಅಸುರಿ ಗುಣಗಳ ಸಂಹಾರ ದೈವಿ ಗುಣಗಳ ಧಾರಣೆಯೆ ದಸರಾ


ಕೊಪ್ಪಳ : ಮನುಷ್ಯ ತನ್ನೊಳಗಿನ ರಾಕ್ಷಸ ಪ್ರವೃತ್ತಿ ಸಂಹಾರ ಮಾಡಿಕೊಳ್ಳಲು ಒಂದೆರಡು ದಿನ ಸಾಲದು ಅದಕ್ಕೆ ನವ ದಿನಗಳ ಕಾಲ ಈ ಹಬ್ಬ ಆಚರಿಸುತ್ತೇವೆ.  ಶಿವನಿಂದ ಶಕ್ತಿ ಪಡೆದವರೇ ಈ ನವದುರ್ಗೆಯರು ಶಿವಶಕ್ತಿಯರು. ನಾವು ಕೂಡ ಅಸುರಿ ಗುಣಗಳ ಮೇಲೆ ವಿಜಯ ಸಾಧಿಸಿ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ಕಾಣುವುದೇ ನವರಾತ್ರಿ ಹಬ್ಬ ಆಚರಣೆ ಮುಖ್ಯ ಉದ್ದೇಶ ಎಂದು ಬ್ರಹ್ಮ ಕುಮಾರಿ ಯೋಗಿನಿ ಅಕ್ಕ ನುಡಿದರು.

 ಅವರು‌ ವಾಸವಿ ದೇವಸ್ಥಾನದಲ್ಲಿ ಆರ್ಯವೈಶ್ಯ ಸಮಾಜ ಏರ್ಪಡಿಸಿದ್ದ ನವರಾತ್ರಿ  ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು. 

ಮನುಷ್ಯ ತನ್ನ  ಸಿಟ್ಟು, ದ್ವೇಷ, ಅಸೂಯೆ, ಅಹಂಕಾರಗಳನ್ನು   ಸಂಹರಿಸಿಕೊಂಡು ಶಾಂತಿ ಸಮಾಧಾನ ಹಸನ್ಮುಖತೆಯಂಥ ಗುಣ ಧಾರಣೆಯೂ ದಸರಾ ಆಚರಣೆ ಮುಖ್ಯ ಉದ್ದೇಶ ಎಂದ ಅವರು ದಸರಾ ಪ್ರಯುಕ್ತ "ಮನಶಾಂತಿಗಾಗಿ ಶಿವಧ್ಯಾನ ಶಿಬಿರ" ಪ್ರತಿದಿನ ಬೆಳಗ್ಗೆ ಮತ್ತು ಸಂಜೆ 7 ರಿಂದ 8 ವರೆಗೆ ಏರ್ಪಡಿಸಿದ್ದು ಲಾಭ ಪಡೆಯುವಂತೆ ಸಾರ್ವಜನಿಕರಿಗೆ ಕರೆ ನೀಡಿದರು.

 ಈ ಸಂದರ್ಭದಲ್ಲಿ ಈಶ್ವರೀಯ ವಿಶ್ವ ವಿದ್ಯಾಲಯದ  "ಚೈತನ್ಯ ದೇವಿಯ ರೂಪಕ" ಜನರನ್ನು ಆಕರ್ಷಿಸಿತು. 

ವೇದಿಕೆಯಲ್ಲಿ ಆರ್ಯವೈಶ್ಯ ಸಮಾಜದ ಅಧ್ಯಕ್ಷರಾದ ಶ್ರೀನಿವಾಸ್ ಗುಪ್ತ ಉಪಾಧ್ಯಕ್ಷರಾದ ನಾರಾಯಣ ಕುರುಗೋಡು ಕಾರ್ಯದರ್ಶಿ ಮಲ್ಲಿಕಾರ್ಜುನ್ ಜಾನೆಕಲ್, ಶಂಕರ್ ಜನಾದ್ರಿ ಮುಂತಾದವರು ಉಪಸ್ಥಿತರಿದ್ದರು.



Share this news

 Comments   0

Post your Comment

PEOPLE'S OPINION

Be the first person to comment this.

ಹೊಸ ಸುದ್ದಿಗಳು


Jan 24 2025 4:46PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಚಾಲಕರ ದಿನ 46 ಚಾಲಕರಿಗೆ ಪ್ರಶಂಸಾ ಪತ್ರ ನಗದು ಪುರಸ್ಕಾರ
Jan 23 2025 11:05AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಜ.27 ವಿಧಾನಸೌಧ ಮುಂದೆ ಕನ್ನಡ ತಾಯಿ ಭುವಮೇಶ್ವರಿ ಪ್ರತಿಮೆ ಅನಾವರಣ
Jan 23 2025 10:45AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕರ್ನಾಟಕ ಸಾಹಿತ್ಯ ಅಕಾಡೆಮಿ ಕಾರ್ಯಕ್ರಮ
Jan 22 2025 1:49PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಹೊರಗುತ್ತಿಗೆ ನೌಕರರ ಜೈಲ್ ಭರೋ ಹೋರಾಟ : ಮಹಿಳೆ ಅಸ್ವಸ್ಥ
Jan 21 2025 12:22PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಜನೆವರಿ 22 : ಶ್ರೀ ಶಿವಶಾಂತ ಮಂಗಲ ಭವನದಲ್ಲಿ ಸಮಾರಂಭ
Jan 20 2025 8:59PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಆಗ್ರಹ
Jan 19 2025 10:49PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸಾವಿನ ನಂತರ ಏನು ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಯತ್ನ
Jan 15 2025 9:55PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಭಕ್ತಿ ಸಂಭ್ರಮದಿಂದ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ
Jan 15 2025 9:05PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಜಗತ್ತಿನ ಎಂಟನೆ ಅದ್ಭುತ ಕೊಪ್ಪಳ ಜಾತ್ರೆ : ವಿಜಯೇಂದ್ರ
Jan 14 2025 11:21AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಮೇಲ್ಸೇತುವೆ ಉದ್ಘಾಟನೆ ಸಂಗಣ್ಣ ಕರಡಿ ಗೈರು





     
Copyright © 2021 Agni Divya News. All Rights Reserved.
Designed & Developed by We Make Digitize