Advt. 
 Views   918

ಸಾಧನೆಗೆ 7 ಸೂತ್ರಗಳು

Jan 09, 2022, 04:22 PM IST
ಸಾಧನೆಗೆ 7 ಸೂತ್ರಗಳು

ಸಾಧನೆ ಸಾಧಕನ ಸ್ವತ್ತು' ಅಕ್ಷರಶಃ ಈ ಮಾತು ನಿಜ. ಯಶಸ್ಸು ಪಡೆಯಲು ಕಠಿಣ ಪರಿಶ್ರಮ ಅವಶ್ಯಕ. ಸಮಾಜದಲ್ಲಿ ಉತ್ತಮ ಸ್ಥಾನಮಾನ ಪಡೆದು, ಯಶಸ್ವಿ ವ್ಯಕ್ತಿಯಾಗಲು ಹಲವು ವರ್ಷಗಳವರೆಗೆ ತಾಳ್ಮೆ ಅತೀ ಮುಖ್ಯ. ಸಾಧನೆಯೆಂಬ ಶಿಖರ ತಲುಪಲು  ಇದೋ ಸಪ್ತ  ಸೂತ್ರಗಳು. ಇವುಗಳನ್ನು ಅಳವಡಿಸಿಕೊಂಡು ಯಶಸ್ವಿ ವ್ಯಕ್ತಿಗಳಾಗೋಣ. ಏನು ಈ ಈ ಸಪ್ತ ಸೂತ್ರಗಳು ? ಅವುಗಳ ಬಗ್ಗೆ ತಿಳಿದುಕೊಳ್ಳೋಣ.

 ಸ್ವಪ್ರೇರಣೆ:
 ಯಾವುದೇ ಒಂದು ಕಾರ್ಯ ನಡೆಯಬೇಕಾದರೆ ಅದಕ್ಕೆ ಪ್ರೇರಣೆ ಅವಶ್ಯಕ. ಅದು ಬಾಹ್ಯವಾಗಿ ಪಡೆಯುವುದು  ಜನಸಾಮಾನ್ಯರ ಅಭ್ಯಾಸ. ಆದರೆ ಸ್ಪೂರ್ತಿದಾಯಕ ನುಡಿ,ಚಿತ್ರಗಳಿಂದ ಸಿಗುವ ಉತ್ಸಾಹ ,ಪ್ರೇರಣೆ ತಾತ್ಕಾಲಿಕ. ಆದರೆ ಸ್ವಪ್ರೇರಣೆ ಶಾಶ್ವತವಾಗಿ ಮನದಲ್ಲಿ ನೆಲೆಯೂರಿ ಪ್ರತಿಕ್ಷಣವು ನಮ್ಮನ್ನು ಜಾಗೃತರಾಗಿರುವಂತೆ  ಮಾಡುತ್ತದೆ. ಆದ್ದರಿಂದ ಸಾಧನೆ ಮಾಡುವವರಿಗೆ ಇದು ಮೊದಲ ಸೂತ್ರವೆಂದರೆ ಅತಿಶಯೋಕ್ತಿಯೇನಲ್ಲ.

 ಪ್ರಯತ್ನ:
 “ಪ್ರಾಕ್ಟಿಸ್ ಮೇಕ್ಸ್ ಮ್ಯಾನ್ ಪರ್ಪೇಕ್ಟ್” ಎಂಬ ಆಂಗ್ಲ ಮಾತೊಂದು ಪ್ರಯತ್ನದ ಪ್ರಾಮುಖ್ಯತೆಯನ್ನು ಅತ್ಯಂತ ಅರ್ಥಗರ್ಭಿತವಾಗಿ ತಿಳಿಸುತ್ತದೆ. ಪ್ರಯತ್ನವಿಲ್ಲದೆ ಸಾಧನೆ ಅಸಾಧ್ಯ. ಇದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ ಥಾಮಸ್ ಅಲ್ವಾ ಎಡಿಸನ್ .ಅವರ ಅನೇಕ ವಿಫಲ ಪ್ರಯತ್ನಗಳ ಫಲವೇ ಬಲ್ಬ್ ಆವಿಷ್ಕಾರ. ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಪ್ರಯತ್ನ ಬೇಕೆ ಬೇಕು. ಅದಕ್ಕಾಗಿ ಸಾಧನೆಗೆ ಬೇಕಾದ ಸೂತ್ರಗಳಲ್ಲಿ ಪ್ರಯತ್ನಕ್ಕೆ ಎರಡನೇ ಸ್ಥಾನ. ಮತ್ತೇಕೆ ತಡ ನೀವು ನಿಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಸಾಧನೆ ಮಾಡಲು ಪ್ರಯತ್ನಿಸಿ.

 ತಾಳ್ಮೆ:
          ಸಾಧಿಸಬೇಕು ಎಂದವರಿಗೆ ತಾಳ್ಮೆ ಇರಲೇಬೇಕು. ಏಕೆಂದರೆ ಯಶಸ್ಸು ಅಥವಾ ಸಾಧನೆಯೆಂಬುದು ರಾತ್ರೋರಾತ್ರಿ ನಡೆಯುವ ಪವಾಡವಲ್ಲ. ಅದಕ್ಕೆ ತುಂಬಾ ದಿನಗಳ ಶ್ರಮ, ಶ್ರದ್ಧೆ ಬೇಕು. ಇವುಗಳನ್ನು ಮೈಗೂಡಿಸಿಕೊಂಡರೆ ಬಹುಕಾಲದ ನಂತರ ಯಶಸ್ಸು ಸಿದ್ಧಿಸಲು ಸಾಧ್ಯ. ಇದರಲ್ಲಿ ತಾಳ್ಮೆಯ ಪಾತ್ರ ಮಹತ್ವದ್ದು‌. ಅದಕ್ಕಾಗಿ ಸಾಧನೆಗೆ ಸಪ್ತಾಂಗ ಸೂತ್ರದಲ್ಲಿ ತಾಳ್ಮೆ ಸ್ಥಾನ ಪಡೆದಿದೆ.

 ಕಠಿಣ ಪರಿಶ್ರಮ:
ಅವಿರತ ಶ್ರಮ,ಶ್ರದ್ಧೆಯಿಂದ ಮಾತ್ರ ಯಶಸ್ಸು ಪಡೆಯಲು ಸಾಧ್ಯ. ಇದರ ಹೊರತು ಯಾವುದೇ ಅಡ್ಡ ಅಥವಾ ವಾಮ ಮಾರ್ಗವಿಲ್ಲ.ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದೆ  ಆದರೆ ಸಾಧನೆ ಸಿದ್ದಿಸುತ್ತದೆ.

 ಮಾರ್ಗದರ್ಶಕ: ಸಾಧನೆಯ ರಹದಾರಿಯಲ್ಲಿ ನಡೆಯಲು ಮಾರ್ಗದರ್ಶಕರೊಬ್ಬರು ಇರಲೇಬೇಕು. ಅದು ನಿಮ್ಮ ತಾಯಿ-ತಂದೆ ಆಗಿರಬಹುದು, ಒಡಹುಟ್ಟಿದವರಾಗಿರಬಹುದು ಅಥವಾ ಶಿಕ್ಷಣ ನೀಡುವ ಶಿಕ್ಷಕರಾದರೂ ಆಗಿರಬಹುದು. ಒಟ್ಟಾರೆ ಸಾಧನೆಯ ಪಥದಲ್ಲಿ ಸಾಗುವ ಪ್ರತಿಯೋರ್ವರಿಗೂ ಮಾರ್ಗದರ್ಶಕರ ಅವಶ್ಯಕತೆ ಬಹುಮುಖ್ಯ.

 ನಿಂದಕರಿರಲಿ:
ನಮ್ಮ ಪ್ರತಿ ಹೆಜ್ಜೆಯಲ್ಲೂ ತಪ್ಪು ಕಂಡು ಹಿಡಿಯುವ  ನಮ್ಮ ಕಾರ್ಯದಲ್ಲಿ ದೋಷ ಹುಡುಕುವ ವರ್ಗವೊಂದಿರಲೇಬೇಕು. ಆಗಲೇ ನಾವು ಜವಾಬ್ದಾರಿಯಿಂದಿರಲು ಜೀವನ ನಡೆಸಲು, ಮುನ್ನೆಡೆಯಲು ಸಾಧ್ಯವಾಗುವುದು.

 ಸದ್ವಿಚಾರಗಳಿರಲಿ:
ಪ್ರತಿ ವಿಚಾರವು ಸಕರಾತ್ಮಗಿರಲಿ ಆಗ ಸಾಧನೆ ಎಂಬುದು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಸದ್ವಿಚಾರಗಳು ವ್ಯಕ್ತಿಯ ವ್ಯಕ್ತಿತ್ವ ರೂಪಿಸಿ ಸಾಧನೆಯಡೆಗೆ ಕೊಂಡ್ಯೊಯುತ್ತವೆ.‌ಆದ್ದರಿಂದ ಸದಾ ಸದ್ವಿಚಾರಶೀಲರಾಗಿರಿ.

   ಸಾಧನೆಗೆ ಮಿತಿಯಂಬುದಿಲ್ಲ. ಅದು ಜಾತಿ-ಮತ, ವರ್ಣ, ಲಿಂಗಗಳ ಎಲ್ಲೆ ಮೀರಿದ್ದು. ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಬ್ಬರೂ ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಸಾಧಕರಾಗಬಹುದು. ಆದರೆ ಮನಸ್ಸು ಮಾಡಬೇಕಷ್ಟೇ. ಆ ಮನಸ್ಸು ನಿಮ್ಮದಾಗಲೆಂದು ಹಾರೈಸುವೆ.
 
 ಸುರೇಶ  ತಂಗೋಡ
 ಕೊಪ್ಪಳ-583231



Share this news

 Comments   3

Post your Comment

PEOPLE'S OPINION

ಸಾಧನೆ 7 ಸೂತ್ರಗಳು ಚೆನ್ನಾಗಿ ಮುಡಿ ಬಂದಿದೆ ಧನ್ಯವಾದಗಳು
Hanumanthappa Chalavadi   Jan 10 2022 5:19PM


ಅದ್ಭುತವಾದ ಲೇಖನ...
Shakeel I.S   Jan 10 2022 8:50AM


It's been really wonderful gesture and thought shared to become successful in life. All sapta sutras are well defined. All the best for your future
Dharmendra R Jayi   Jan 9 2022 9:12PM



LATEST ARTICLES


Mar 5 2026 7:04AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಬಲ್ದೋಟಾ ಗೇಟ್ ಬಂದ್ : ಹೋರಾಟಕ್ಕೆ ಮಣಿಯುತ್ತಾ ಸರಕಾರ ?
Mar 4 2026 11:36PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಕಾರ್ಖಾನೆ ಧೂಳಿಗೆ ಬೇಸತ್ತು ದಯಾಮರಣ ಬೇಡಿಕೆ
Mar 4 2026 6:32AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಹೋಳಿ ನಂತರ ಕೆರೆಯಲ್ಲಿ ಸ್ನಾನಕ್ಕೆ ಹೋದ ಇಬ್ಬರು ನೀರುಪಾಲು
Mar 2 2026 7:50AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಮುಸ್ಲಿಂರ 4% ಮೀಸಲಾತಿ : ಕಾಂಗ್ರೆಸ್ ವಿರುದ್ಧ ನಾಡಗೌಡ್ರು ವಾಗ್ದಾಳಿ
Mar 1 2026 8:52PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಅಕ್ರಮ ಗಣಿಗಾರಿಕೆ ಮೇಲೆ ಪೊಲೀಸ್ ದಾಳಿ
Mar 1 2026 5:30PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಬಣವೆಗಳಿಗೆ ಬೆಂಕಿ ಸಂಪೂರ್ಣ ಭಸ್ಮ
Mar 1 2026 5:22PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಯುದ್ದ ಸ್ಥಿತಿ : ದುಬೈನಲ್ಲಿ ಉಳಿದುಕೊಂಡಿರುವ ರಾಯರಡ್ಡಿ ಪುತ್ರಿ
Feb 28 2026 5:03AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಅತ್ಯಾಚಾರ ಎಸಗಿದ್ದ ಶಿಕ್ಷಕನಿಗೆ ಜೀವಾವಧಿ ಶಿಕ್ಷೆ
Feb 28 2026 4:59AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸಂಸದರಿಂದ ಅಕ್ಷೇಪಾರ್ಹ ಪದ ಬಳಕೆ ನೋವುಂಟು ಮಾಡಿದೆ
Feb 27 2026 7:05AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳದಿಂದಲೇ ಜೆಡಿಎಸ್ ಮೊದಲ ಗೆಲುವು : ಸಮೀಕ್ಷೆ




Copyright © 2026 Agni Divya. All Rights Reserved.
Designed & Developed by We Make Digitize