ಕೊಪ್ಪಳ : ಹಿಂದಿನ ಸರಕಾರ ಘೋಷಿಸಿದ್ದ ಪಿಂಜಾರ/ನದಾಫ್ ಅಭಿವೃದ್ಧಿ ನಿಗಮಕ್ಕೆ ಅನುದಾನ ನೀಡಲು ಮನವಿ ಮಾಡಿದರೆ ಸರಕಾರ ಸ್ಪಂದಿಸುತ್ತಿಲ್ಲ ಎಂದು ಕರ್ನಾಟಕ ರಾಜ್ಯ ನದಾಫ್/ಪಿಂಜಾರ ಸಂಘದ ರಾಜ್ಯ ಕೋಶಾಧಿಕಾರಿ ಶಹಬುದ್ದೀನ್ ನೂರಬಾಷಾ ಹೇಳಿದರು.
ಶನಿವಾರ ಕೊಪ್ಪಳ ಮೀಡಿಯಾ ಕ್ಲಬ್ ನಲ್ಲಿ ಮಾತನಾಡಿದ ಅವರು ನಮ್ಮ ನಿಗಮಕ್ಕೆ ಅನುದಾನಕ್ಕಾಗಿ ಆಗ್ರಹಿಸಿ ಇದೇ ಜುಲೈ 22 ರಂದು ತಾಲೂಕು, ಜಿಲ್ಲಾ ಕೇಂದ್ರ ಸೇರಿ ರಾಜ್ಯದಾದ್ಯಂತ ಸಿಎಂಗೆ ಮನವಿ ನೀಡುತ್ತೇವೆ. ಆಗಲೂ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ಧರಣಿ ಮಾಡುತ್ತೇವೆ.
ರಾಜ್ಯದಲ್ಲಿ 22-25 ಲಕ್ಷ ಜನಸಂಖ್ಯೆಯ ನಮ್ಮ ಸಮಾಜ ಹಲವು ರಂಗಗಳಲ್ಲಿ ಹಿಂದುಳಿದಿದೆ. ನಮಗೆ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಯೋಜನೆಗಳ ಸೌಲಭ್ಯ ಪಡೆಯಲು ಸರಕಾರದ ನಿರ್ದೇಶನ ಇದ್ದರೂ ತಾಂತ್ರಿಕ ದೋಷ ಮತ್ತು ಅಧಿಕಾರಿಗಳ ನಿರ್ಲಕ್ಷ್ಯತೆಯಿಂದ ಯಾವುದೇ ಯೋಜನೆಗಳು ಸರಿಯಾಗಿ ತಲುಪದೆ ವಂಚಿತರಾಗಿದ್ದೇವೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ನದಾಫ್/ ಪಿಂಜಾರ ಸಂಘದ ಜಿಲ್ಲಾಧ್ಯಕ್ಷರು ಕೆ.ಎಫ್. ಮುದ್ದಾಬಳ್ಳಿ , ಕೊಪ್ಪಳ ತಾಲೂಕು ಅಧ್ಯಕ್ಷರು ಅಸ್ಮಾನಸಾಬ , ಉಪಾಧ್ಯಕ್ಷರಾದ ಮೀರಾಸಾಬ ಬನ್ನಿಗೋಳ, ಮುರ್ತುಜಾಸಾಬ ಚುಟ್ಟದ್, ಕಾರ್ಯದರ್ಶಿ ಮುಸ್ತಫಾ ಕುದರಿಮೋತಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷರು ಸಲಿಮಾ ಜಹಾಂ ಉಪಸ್ಥಿತರಿದ್ದರು.