Advt. 
 Views   868
Jul 20 2024 8:43PM

ಕೊಪ್ಪಳ : ನದಾಫ್ /ಪಿಂಜಾರ ಅಭಿವೃದ್ದಿ ನಿಗಮ - ಅನುದಾನಕ್ಕೆ ಆಗ್ರಹ


ಕೊಪ್ಪಳ : ಹಿಂದಿನ‌ ಸರಕಾರ ಘೋಷಿಸಿದ್ದ ಪಿಂಜಾರ/ನದಾಫ್ ಅಭಿವೃದ್ಧಿ ನಿಗಮಕ್ಕೆ ಅನುದಾನ ನೀಡಲು ಮನವಿ ಮಾಡಿದರೆ ಸರಕಾರ ಸ್ಪಂದಿಸುತ್ತಿಲ್ಲ ಎಂದು ಕರ್ನಾಟಕ ರಾಜ್ಯ ನದಾಫ್/ಪಿಂಜಾರ ಸಂಘದ ರಾಜ್ಯ ಕೋಶಾಧಿಕಾರಿ ಶಹಬುದ್ದೀನ್ ನೂರಬಾಷಾ ಹೇಳಿದರು.

ಶನಿವಾರ ಕೊಪ್ಪಳ ಮೀಡಿಯಾ ಕ್ಲಬ್ ನಲ್ಲಿ ಮಾತನಾಡಿದ ಅವರು ನಮ್ಮ‌ ನಿಗಮಕ್ಕೆ ಅನುದಾನಕ್ಕಾಗಿ ಆಗ್ರಹಿಸಿ ಇದೇ ಜುಲೈ 22 ರಂದು ತಾಲೂಕು, ಜಿಲ್ಲಾ ಕೇಂದ್ರ ಸೇರಿ ರಾಜ್ಯದಾದ್ಯಂತ ಸಿಎಂಗೆ ಮನವಿ ನೀಡುತ್ತೇವೆ. ಆಗಲೂ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ಧರಣಿ ಮಾಡುತ್ತೇವೆ.

ರಾಜ್ಯದಲ್ಲಿ 22-25 ಲಕ್ಷ ಜನಸಂಖ್ಯೆಯ ನಮ್ಮ ಸಮಾಜ ಹಲವು ರಂಗಗಳಲ್ಲಿ ಹಿಂದುಳಿದಿದೆ. ನಮಗೆ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಯೋಜನೆಗಳ ಸೌಲಭ್ಯ ಪಡೆಯಲು ಸರಕಾರದ ನಿರ್ದೇಶನ ಇದ್ದರೂ ತಾಂತ್ರಿಕ ದೋಷ ಮತ್ತು ಅಧಿಕಾರಿಗಳ ನಿರ್ಲಕ್ಷ್ಯತೆಯಿಂದ ಯಾವುದೇ ಯೋಜನೆಗಳು ಸರಿಯಾಗಿ ತಲುಪದೆ ವಂಚಿತರಾಗಿದ್ದೇವೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ನದಾಫ್/ ಪಿಂಜಾರ ಸಂಘದ ಜಿಲ್ಲಾಧ್ಯಕ್ಷರು ಕೆ.ಎಫ್. ಮುದ್ದಾಬಳ್ಳಿ , ಕೊಪ್ಪಳ ತಾಲೂಕು ಅಧ್ಯಕ್ಷರು ಅಸ್ಮಾನಸಾಬ , ಉಪಾಧ್ಯಕ್ಷರಾದ ಮೀರಾಸಾಬ ಬನ್ನಿಗೋಳ, ಮುರ್ತುಜಾಸಾಬ ಚುಟ್ಟದ್, ಕಾರ್ಯದರ್ಶಿ ಮುಸ್ತಫಾ ಕುದರಿಮೋತಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷರು ಸಲಿಮಾ ಜಹಾಂ ಉಪಸ್ಥಿತರಿದ್ದರು.



Share this news

 Comments   0

Post your Comment

PEOPLE'S OPINION

Be the first person to comment this.

ಹೊಸ ಸುದ್ದಿಗಳು


May 17 2025 9:39PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಖಾಸಗಿ ಶಾಲೆಗಳ ಡೊನೇಷನ್ ಹಾವಳಿ ಆರೋಪ
May 17 2025 8:44PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : 625 ಕ್ಕೆ 610 ಅಂಕ ಪಡೆದ ವಿದ್ಯಾರ್ಥಿನಿ
May 17 2025 7:51PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಆಪರೇಷನ್ ಸಿಂದೂರ ಯಶಸ್ಸು : ಕೊಪ್ಪಳದಲ್ಲಿ ತಿರಂಗಾ ಯಾತ್ರೆ
May 15 2025 8:01PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕುಷ್ಟಗಿ - ಹುಬ್ಬಳ್ಳಿ ಹೊಸ ರೈಲಿನ ವೇಳಾಪಟ್ಟಿ
May 16 2025 9:56AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕುಷ್ಟಗಿ : ರೈಲ್ವೆ ಅಧಿಕಾರಿಗಳ ವಿರುದ್ದ ತಂಗಡಗಿ - ರಾಯರಡ್ಡಿ ಅಸಮಾಧಾನ
May 13 2025 8:26PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಸಿಡಿಲಿಗೆ ಇಬ್ಬರು ರೈತರು - ಎತ್ತು ಬಲಿ
May 12 2025 9:04PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಮೂರು ಜಿಲ್ಲೆಯ ಐವರು ಆರೋಪಿಗಳು ಅರೆಸ್ಟ್
May 10 2025 10:43AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ರಜೆ ಮೊಟಕುಗೊಳಿಸಿ ಕರ್ತವ್ಯಕ್ಕೆ ತೆರಳಿದ ಸೈನಿಕರು
May 10 2025 8:28AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಮಸ್ಜೀದ್ ದರ್ಗಾಗಳಲ್ಲಿ ಮುಸ್ಲಿಂರಿಂದ ವಿಶೇಷ ಪ್ರಾರ್ಥನೆ
May 7 2025 9:10PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಆಪರೇಷನ್ ಸಿಂಧೂರ : ಹಿಟ್ನಾಳ ರಾಯರಡ್ಡಿ ಕರಡಿ ಸ್ವಾಗತ





     
Copyright © 2021 Agni Divya News. All Rights Reserved.
Designed & Developed by We Make Digitize