Advt. 
 Views   828
Jul 11 2024 10:28AM

MHPS ಶಾಲೆ ಹತ್ತಿರ ಪಾರ್ಕಿಂಗ್ : ವಿದ್ಯಾರ್ಥಿಗಳ ಸುರಕ್ಷತೆಯ ಆತಂಕ


ಕೊಪ್ಪಳ : ಶಾಸಕರ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ (MHPS)  ಮುಂದೆ ಹೈವೆಯಲ್ಲಿ ವಾಹನಗಳ ಪಾರ್ಕಿಂಗ್, ರಸ್ತೆಯಲ್ಲಿ ವ್ಯಾಪಾರದಿಂದ ಶಾಲೆಗೆ ಹೋಗಿ ಬರುವ ವಿದ್ಯಾರ್ಥಿಗಳ ಸುರಕ್ಷತೆ ಬಗ್ಗೆ ಪಾಲಕರಲ್ಲಿ ಆತಂಕ ಮೂಡಿಸಿದೆ.

MHPS ಶಾಲಾ ಆವರಣದಲ್ಲಿ ಮೌಲಾನಾ ಆಜಾದ್ ಶಾಲೆ ಕೂಡ ಇದ್ದು ಎರಡೂ ಶಾಲೆಗಳ ಸುಮಾರು 450-500 ವಿದ್ಯಾರ್ಥಿಗಳಿದ್ದಾರೆ.

MHPS ಶಾಲೆಯ ಮಳಿಗೆ ಮುಂದಿನ ಫುಟ್ ಪಾತ್ ಕೆಲವರು ಅತಿಕ್ರಮಿಸಿಕೊಂಡಿದ್ದು ಮುಂದಿರುವ ಹೈವೆಯಲ್ಲಿ ವ್ಯಾಪಾರ ಮಾಡುವುದು ಅದೇ ಹೈವೆಯಲ್ಲಿ ಟೂರಿಂಗ್ ಟ್ರಾವೆಲ್ ವಾಹನ ಪಾರ್ಕಿಂಗ್ ಮಾಡುವುದರಿಂದ ಬೆಳಗ್ಗೆ 9ರಿಂದ10 ಸಂಜೆ 4ರಿಂದ 5 ರವರೆಗೆ ವಿದ್ಯಾರ್ಥಿಗಳು ಶಾಲೆಗೆ ಹೋಗಿ ಬರಲು ಹೆದರುವಂತಾಗಿದೆ.

ಬೆಳಗ್ಗೆ 8 ರಿಂದ 11 ರವರೆಗೆ ಹೈವೆಯಲ್ಲಿ ಹೆಚ್ಚು ವಾಹನಗಳ ಸಂದಣಿ ಇರುತ್ತದೆ. ವಿಶೇಷವಾಗಿ ಹಳೆ ಜಿಲ್ಲಾಸ್ಪತ್ರೆ ಮುಂದಿನ ರಸ್ತೆಯಿಂದ ಬರುವ ವಿದ್ಯಾರ್ಥಿಗಳು ಹೈವೆ ದಾಟಿದರೆ ಶಾಲೆ ಮುಂದಿನ ಫುಟ್ ಪಾತ್ ಒತ್ತುವರಿ, ಹೈವೆ ನಲ್ಲಿ ಪಾರ್ಕಿಂಗ್ ನಿಂದ ಹೈವೆನಲ್ಲಿಯೇ ನಡೆದು ಶಾಲೆ ಕಂಪೌಂಡ್ ನಲ್ಲಿ ಕಾಲಿಡಬೇಕು. 

ಈ ಗಂಭೀರ ಸಮಸ್ಯೆ ಬಗ್ಗೆ SDPI ಜಿಲ್ಲಾ ಸಮಿತಿ ಸದಸ್ಯ ಸಲಿಂ ಖಾದ್ರಿ ಹಾಗೂ ಸಂಗಡಿಗರು ಶಾಲೆಯ HM ಗೆ ಭೇಟಿ ಆಗಿ ಮಾತನಾಡಿದ್ದು HM ಏನು ಮಾಡುತ್ತಾರೊ ಕಾದು ನೋಡಬೇಕು.

ಶಾಲಾ ಅಧ್ಯಕ್ಷ ಶಾಸಕ ರಾಘವೇಂದ್ರ ಹಿಟ್ನಾಳ, ಬಿಇಒ , ಡಿಡಿಪಿಐ, ನಗರಸಭೆ, ಟ್ರಾಫಿಕ್ ಪೊಲೀಸ್ ಇತ್ತ ಗಮನಹರಿಸಿ ಸಮಸ್ಯೆ ಬಗೆಹರಿಸಲಿ ಎಂಬುದು ಸಾರ್ವಜನಿಕರ ಒತ್ತಾಯ.



Share this news

 Comments   0

Post your Comment

PEOPLE'S OPINION

Be the first person to comment this.

ಹೊಸ ಸುದ್ದಿಗಳು


Jul 4 2025 8:57PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸಕ್ಕರೆ ಕಾರ್ಖಾನೆಗೆ ಎನ್ಓಸಿ ಕೊಡಬೇಡಿ : ಗ್ರಾಮಸ್ಥರ ಒತ್ತಾಯ
Jul 2 2025 9:14PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕರೆಂಟ್ ಕನೆಕ್ಷನ್ ಕಟ್ ಮಾಡಲು ಹೋದವರು ಕರೆಂಟ್ ಬಿಲ್ ಕಟ್ಟಿದರು
Jul 1 2025 8:01AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕಾಮಗಾರಿ ಗುತ್ತಿಗೆ ಹಿಟ್ನಾಳ್ ಕುಟುಂಬದ ಕಪಿಮುಷ್ಠಿಯಲ್ಲಿ : ಸಿವಿಸಿ
Jun 26 2025 11:48AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಗಂಗಾವತಿ ಇಂಜಿನಿಯರಿಂಗ್ ಕಾಲೇಜ್ ಕಳಪೆ ಕಾಮಗಾರಿ
Jun 25 2025 8:29PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳದಲ್ಲಿ ಅಭಿವೃದ್ದಿ ಏಕೆ ಮಾಯವಾಗಿದೆ ?
Jun 24 2025 4:58PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ನಮ್ಮ ಊರಿನ ಹತ್ರ ಸಕ್ಕರೆ ಫ್ಯಾಕ್ಟರಿ ಬೇಡ
Jun 24 2025 3:53PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕುಷ್ಟಗಿ : ವಸತಿ ಇಲಾಖೆಯಲ್ಲಿ ಲಂಚ ಆರೋಪ : ತನಿಖೆ ನಡೆಯಲಿ
Jun 23 2025 9:11AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಡಾ. ಬಸವರಾಜ ದಿಂಡೂರ ಅಭಿನಂದನಾ ಗ್ರಂಥ ಬಿಡುಗಡೆ
Jun 22 2025 1:35PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ತಪ್ಪಿದ ಭಾರಿ ಅನಾಹುತ
Jun 22 2025 9:25AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಖಬರಸ್ಥಾನ ಸ್ವಚ್ಚತೆ : ವಾಗ್ವಾದ





     
Copyright © 2021 Agni Divya News. All Rights Reserved.
Designed & Developed by We Make Digitize