ಕೊಪ್ಪಳ ಜಿಲ್ಲಾ ಸಹಕಾರ ಯೂನಿಯನ್ ಗೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಶನಿವಾರ ಜರುಗಿತು.
2024-2029 ಸಾಲಿಗೆ ಅಧ್ಯಕ್ಷರಾಗಿ ಶೇಖರಗೌಡ ಮಾಲಿಪಾಟೀಲ, ಉಪಾಧ್ಯಕ್ಷರಾಗಿ ಹಾಲಯ್ಯ ಹುಡೇಜಾಲಿ ಅವಿರೋಧವಾಗಿ ಆಯ್ಕೆಯಾದರು.
ಯೂನಿಯನ್ ನಿರ್ದೇಶಕರಾದ ಅಂದಾನಪ್ಪ ಡಂಬಳ, ಸಿ.ಹೆಚ್. ಸತ್ಯನಾರಾಯಣ, ಶರಣಗೌಡ ರಡ್ಡಿ, ಶಂಭುಲಿಂಗಪ್ಪ ಜೋಳದ, ದಾದಾಪೀರ್ ತಂದೆ ಗೋನೆಗೊಂಡಲ, ಮಹಾಂತೇಶ ಸಜ್ಜನ, ಶಕುಂತಲಾ ಹುಡೇಜಾಲಿ, ರಾಜೀವ್ ಮಾದಿನೂರು, ಭೀಮರಡ್ಡಿ ಶ್ಯಾಡ್ಲಗೇರಿ, ಮಾರುತಿ ಹೊಸಮನಿ, ವೆಂಕಟೇಶ ಶೆಟ್ಟರ, ತೋಟಪ್ಪ ಕಾಮನೂರು ಉಪಸ್ಥಿತರಿದ್ದರು.
ಶೇಖರಗೌಡ ಮಾಲಿಪಾಟೀಲ ಅವರು ಅಖಂಡ ರಾಯಚೂರು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರಾಗಿ ಪ್ರಸ್ತುತ ಕೊಪ್ಪಳ ಜಿಲ್ಲಾ ಸಹಕಾರ ಯೂನಿಯನ್ ಗೆ 7ನೇ ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಶೇಖರಗೌಡರು ಸಹಕಾರ ಕ್ಷೇತ್ರದ ಸೇವೆಗೆ “ಸಹಕಾರ ರತ್ನ” ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ ವ್ಯಕ್ತಿಯೊರ್ವರು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷರಾದ ಹೆಮ್ಮೆ ಶೇಖರಗೌಡರದು.
ಶನಿವಾರ ಅಧ್ಯಕ್ಷರು, ಉಪಾಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ಸುಮಾರು 500ಕ್ಕೂ ಹೆಚ್ಚು ಸಹಕಾರಿಗಳು ಪಾಲ್ಗೊಂಡು ಅಭಿನಂದಿಸಿದರು.