ಕೊಪ್ಪಳ : ಶ್ರೀಗವಿಮಠದ ಲಿಂ. ಶ್ರೀ ಮರಿಶಾಂತವೀರ ಮಹಾಸ್ವಾಮಿಗಳು ಅಂದು ನೆಟ್ಟ ಶಿಕ್ಷಣದ ಮರ ಇಂದು ಅಕ್ಷರಗಳ ಕ್ರಾಂತಿ ರೂಪದಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ನೆರಳು ನೀಡುತ್ತ ಲಕ್ಷೋಪ ಲಕ್ಷ ಮಕ್ಕಳ ಭವಿಷ್ಯ ರೂಪಿಸಿದೆ ಎಂದು ಉಪನ್ಯಾಸಕರಾದ ಡಾ.ಸಿದ್ಧಲಿಂಗಪ್ಪ ಕೊಟ್ನೆಕಲ್ ನುಡಿದರು.
ಅವರು ಸೋಮವಾರ ಶ್ರೀ ಗವಿಸಿದ್ಧೇಶ್ವರ ಹಾಗೂ ಪಿ.ಎಸ್.ಎಮ್.ಎಸ್ ಪದವಿ ಪೂರ್ವ ಕಾಲೇಜುಗಳ ಸಂಯಕ್ತಾಶ್ರಯದಲ್ಲಿ ಲಿಂ.ಜ. ಶ್ರೀ ಮರಿಶಾಂತವೀರ ಮಹಾಸ್ವಾಮಿಗಳ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಂದು ಈ ಭಾಗದಲ್ಲಿ ಶಿಕ್ಷಣ ಎನ್ನುವುದು ಮರಿಚಿಕೆಯಾಗಿತ್ತು ಪ್ರಾಥಮಿಕ, ಪ್ರೌಢ ಶಾಲೆಗಳು ಅಪರೂಪವಾಗಿದ್ದವು. ಕಾಲೇಜು ಶಿಕ್ಷಣಕ್ಕೆ ದೂರದ ಹೈದರಬಾದಗೆ ಹೋಗಬೇಕಿತ್ತು. ಇದನ್ನು ಮನಗಂಡ ಶ್ರೀಗಳು ಪ್ರಾಥಮಿಕ, ಪ್ರೌಢ ಮತ್ತು ಪ ಪೂ ಕಾಲೇಜ್ ಸ್ಥಾಪಿಸಿ ಈ ಭಾಗದಲ್ಲಿ ಶಿಕ್ಷಣದ ಕ್ರಾಂತಿ ಮಾಡಿದರು. ಶ್ರೀ ಗವಿಸಿದ್ಧೇಶ್ವರ ವಿದ್ಯಾವರ್ಧಕ ಸಂಸ್ಥೆ ಸ್ಥಾಪಿಸಿ ಅದಕ್ಕೆ ಕಾಯಕಲ್ಪ ಕೊಟ್ಟ ಕೀರ್ತಿ ಪೂಜ್ಯರಿಗೆ ಸಲ್ಲುತ್ತದೆ. ಅಂತಹ ಪೂಜ್ಯರನ್ನು ನಾವು ಸದಾ ಸ್ಮರಣೆ ಮಾಡುತ್ತಿರಬೇಕು ಎಂದು ಕೋಟ್ನೆಕಲ್ ಹೇಳಿದರು.
ಈ ಸಂದರ್ಭದಲ್ಲಿ ಶ್ರೀ ಗವಿಸಿದ್ಧೇಶ್ವರ ಪ ಪೂ ಕಾಲೇಜ್ ಪ್ರಾಚಾರ್ಯರಾದ ಡಾ. ವಿರೇಶಕುಮಾರ ಎನ್.ಎಸ್ ಮತ್ತು ಪಿ.ಎಸ್.ಎಮ್.ಎಸ್ ಪ ಪೂ ಕಾಲೇಜ್ ಪ್ರಾಚಾರ್ಯರಾದ ಅಗಸ್ಟಿನ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಉಪನ್ಯಾಸಕರಾದ ಡಾ. ಬಾಳಪ್ಪ ತಳವಾರ, ಕಮಲಾ ಅಳವಂಡಿ ಕಾರ್ಯಕ್ರಮ ನಿರ್ವಹಿಸಿದರು.