Advt. 
 Views   606
Jul 1 2024 8:20AM

ಕೊಪ್ಪಳದಲ್ಲಿ ಅತಿವೇಗದಿಂದ ವಾಹನ ಚಾಲನೆ : ಕ್ರಮಕ್ಕೆ ಆಗ್ರಹ


ಕೊಪ್ಪಳ ನಗರದಲ್ಲಿ ವಾಹನಗಳು ಅತಿವೇಗವಾಗಿ ಚಾಲನೆ ಆಗುತ್ತಿದ್ದರೂ,  ನಗರದ ಹೊರವಲಯದಲ್ಲಿ ಬೈಪಾಸ್ ಇದ್ದರೂ ಬೃಹತ್ ವಾಹನಗಳು ನಗರದ ಮೂಲಕ ಸಂಚರಿಸಿದರೂ ಸಂಬಂಧಿಸಿದ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿಲ್ಲ. ಅನಾಹುತಗಳು ಸಂಭವಿಸಿದರೆ ಅಧಿಕಾರಿಗಳೆ ಹೊಣೆ ಎಂದು ಬಿಎಸ್ಪಿ ಜಿಲ್ಲಾಧ್ಯಕ್ಷರಾದ ಕೆ.ಎಸ್.ಮೈಲಾರಪ್ಪ ವಕೀಲರು ಹೇಳಿದರು.

ರವಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಆಡಳಿತ ವರ್ಗ ಜನರಪರ ಕೆಲಸ ಮಾಡುವುದು ಬಿಟ್ಟು ಜನಪ್ರತಿನಿಧಿಗಳ, ಶ್ರೀಮಂತರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ. 

ಅತಿವೇಗದಿಂದ ವಾಹನ ಚಾಲನೆ ಮಾಡಿ ಅಮಾಯಕರ ಜೀವ ಹಾನಿಯಾದರೆ ಅವರನ್ನು ನಂಬಿದ ಕುಟುಂಬದ ಗತಿ ಏನು ? ಮಕ್ಕಳು ಶಾಲೆಗೆ ಹೋಗಿ ಬರುವುದು ಕಷ್ಟಕರವಾಗುತ್ತಿದೆ. RTO ಕಚೇರಿ ಅಧಿಕಾರಿಗಳು ಯಾವ ಕ್ರಮವನ್ನೂ ಜರುಗಿಸುತ್ತಿಲ್ಲ. ಕೊಪ್ಪಳದಲ್ಲಿ ಟ್ರಾಫಿಕ್ ಪೊಲೀಸ್ ಸ್ಟೇಷನ್ ಇದ್ದೂ ಇಲ್ಲದಂತಾಗಿದೆ. ಕೇವಲ ಅಮಾಯಕರನ್ನು, ಶಾಲೆಗೆ ಮಕ್ಕಳನ್ನು ಬಿಡಲು ಹೋದವರನ್ನು , ಗೃಹಬಳಕೆ ಸಾಮಾನು ತರಲು ಹೋದವರ ವಾಹನಗಳಿಗೆ ದಂಡ ಹಾಕುತ್ತಿದ್ದು ಅತಿವೇಗ ವಾಹನ ಚಾಲನೆ ಮಾಡುವವರತ್ತ ಇವರು ಕಣ್ಣೆತ್ತಿ ನೋಡುವುದೂ ಇಲ್ಲ .

ಕೂಡಲೇ ಜಿಲ್ಲಾಡಳಿತ ಈ ಸಮಸ್ಯೆಯತ್ತ ಗಮನಹರಿಸಬೇಕು. ಜನಸಾಮಾನ್ಯರ ರಕ್ಷಣೆಗೆ ಮುಂದಾಗಬೇಕು. ಇಲ್ಲವಾದರೆ ಪ್ರತಿಭಟನೆ ಅನಿವಾರ್ಯ ಎಂದು ಮೈಲಾರಪ್ಪ ಹೇಳಿದರು.

ಈ ಸಂದರ್ಭದಲ್ಲಿ ಸಂಜೀವಮೂರ್ತಿ ಇತರರು ಉಪಸ್ಥಿತರಿದ್ದರು.



Share this news

 Comments   0

Post your Comment

PEOPLE'S OPINION

Be the first person to comment this.

ಹೊಸ ಸುದ್ದಿಗಳು


Jun 12 2025 8:14PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಹುಬ್ಬಳ್ಳಿ ಕುಷ್ಟಗಿ ರೈಲು ವೇಳಾಪಟ್ಟಿ ಬದಲಾವಣೆ
Jun 11 2025 8:51PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕಟ್ಟಡ ನಿರ್ಮಾಣ ಸಂಬಂಧ 50 ಕಂಪನಿ ಮಳಿಗೆಗಳು
Jun 8 2025 11:04PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಮೃಗಶಿರ ಮಳೆ ಕೂಡುವ ವೇಳೆ ಅಸ್ತಮಾಗೆ ಔಷಧಿ
Jun 6 2025 8:47PM | ಜಿಲ್ಲಾ ಸುದ್ದಿಗಳು | ಕೊಪ್ಪಳ ತಾವರಗೇರಿ ಕೊಲೆ ಪ್ರಕರಣ : ಮುಖ್ಯ ಆರೋಪಿಗಳು ಅರೆಸ್ಟ್ ಆಗಿಲ್ಲ
May 31 2025 9:07PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಶಸ್ತ್ರಚಿಕಿತ್ಸೆಗಾಗಿ ಆರ್ಥಿಕ ಸಹಾಯ ಮಾಡಲು ಯುವಕನ ಮನವಿ
May 31 2025 8:55PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಶಸ್ತ್ರಚಿಕಿತ್ಸೆಗಾಗಿ ಆರ್ಥಿಕ ಸಹಾಯಕ್ಕೆ ಮನವಿ
May 31 2025 8:44PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಜೂನ್ 2 ನಂತರ ಕುಡಿಯುವ ನೀರು ಪೋರೈಕೆ ಬಂದ್ ?
May 30 2025 8:54PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಜನೌಷಧಿ ಕೇಂದ್ರ ಸ್ಥಗಿತಕ್ಕೆ ಆದೇಶ : ಬಿಜೆಪಿ ಪ್ರತಿಭಟನೆ
May 30 2025 10:58AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಪತ್ನಿ ಕೊಂದು ಪತಿ ಪರಾರಿ
May 29 2025 10:59PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಗಂಗಾವತಿ ಬೈ ಎಲೆಕ್ಷನ್ ಆದ್ರೆ ಕಾಂಗ್ರೆಸ್ ಟಿಕೆಟ್ ಯಾರಿಗೆ ?





     
Copyright © 2021 Agni Divya News. All Rights Reserved.
Designed & Developed by We Make Digitize