::::::: ಪ್ರಕೃತಿ ::::::
ವನದೇವಿಯ ಮಡಿಲು,
ಮಮತೆಯ ಕಡಲು,
ಆಶ್ರಯ ನೀಡುವ ಒಡಲು,
ಹಸಿರಾಗಿಡಬೇಕು ಯಾವಾಗಲೂ.
ಮಾಡಬೇಕಾಗಿದೆ ಪರಿಸರ ರಕ್ಷಣೆ,
ಇದು ಎಲ್ಲ ಪ್ರಜ್ಞಾವಂತರ ಹೊಣೆ,
ನೀಡಬೇಕು ಎಲ್ಲರಿಗೂ ಪ್ರೇರಣೆ,
ಆಗುವದಾಗ ವನಮಾತೆಯ ಸಂರಕ್ಷಣೆ.
ಭೂಮಿ ಕೇವಲ ಮನುಜರದಲ್ಲ,
ಗಿಡಮರಗಳಿಗೂ ಜೀವವಿದೆಯಲ್ಲಾ,
ಅತ್ತಾಗ ವೃಕ್ಷಗಳ ಕಾನನ,
ಅಸ್ತವ್ಯಸ್ತ ಜೀವಿಗಳ ಜೀವನ.
ಬೆಳವಣಿಗೆಯ ನೆಪದಲಿ,
ಕಡಿಯುತಿಹರು ಮರಗಳ ಎಲ್ಲೆಡೆಯಲಿ,
ವಿಕಾಸದ ಕನಸಿನಲಿ,
ವಿಷದ ಗಾಳಿ ಬೀಸುತಿದೆ ಇಲ್ಲಿ.
ಪ್ರಕೃತಿ ಆ ದೇವನ ಕೊಡುಗೆ,
ಬೆಲೆ ಕೊಡದಿರೆ ಬದುಕು ಸಾವಿನೆಡೆಗೆ,
ಕಿವಿ ಕೊಡದಿರೆ ವ್ರಕ್ಷಮಾತೆಯ ಕೂಗಿಗೆ,
ಮಾರಕ ನಾವೇ ಭಾವಿ ಪೀಳಿಗೆಗೆ.
- ಸುಮಂಗಲಾ ಎಸ್. ಹಂಚಿನಾಳ, ಕೊಪ್ಪಳ