Advt. 
 Views   1018
Dec 27 2023 7:52AM

ಕವಿತೆಯೆಂದರೆ....


ಕವಿತೆಯೆಂದರೆ......

ಕವಿತೆ ಬರೆಯುವುದೆಂದರೆ
ಕನವರಿಸುವುದಲ್ಲ
ಮನದಲಿ ಮಥಿಸಬೇಕು

ಕವಿತೆ ಬರೆಯುವುದೆಂದರೆ
ವನ ವನ ಸುತ್ತುವುದಲ್ಲ
ಚಿತ್ತ ಬಿತ್ತಿಯೊಳು ಚಿಗುರಬೇಕು

ಕವಿತೆ ಬರೆಯುವುದೆಂದರೆ
ಸಾಲುಸಾಲಲಿ ಅಕ್ಷರ ಕೂಡಿಸುವುದಲ್ಲ
ಅಕ್ಕರೆಯ ಸಕ್ಕರೆ ಪಾಕವಾಗಬೇಕು

ಕವಿತೆ ಬರೆಯುವುದೆಂದರೆ
ಪ್ರಯಾಸದಿ ಪ್ರಾಸ ಜೋಡಿಸುವುದಲ್ಲ
ಪುಟಿಪುಟಿಯುವ ಜೀವ ಸೆಲೆಯಿರಬೇಕು

ಕವಿತೆ ಬರೆಯುವುದೆಂದರೆ
ವಿಷಯಕಾಗಿ ತಿಣುಕಾಡುವುದಲ್ಲ
ಹದವಾಗಿ ಕಾದ ಹಾಲ್ಗೆನೆಯಾಗಬೇಕು

ಕವಿತೆ ಬರೆಯುವುದೆಂದರೆ 
ಮಿಡಿಗಾಯಿ ಕಸುಗಾಯಿಯಂತಲ್ಲ
ಮಾಗಿ ಕಳೆತ ಹಣ್ಣಾಗಬೇಕು

ಕವಿತೆ ಬರೆದದ್ದು ಕವಿತೆಯಂತಿರಬೇಕು
ಸವಿ ರಸಕಾವ್ಯದಂದದಿ ರುಚಿಸಬೇಕು
ರಮ್ಯತೆಯ ಭಾವ ಮೈತೆಳೆಯಬೇಕು.
  
- ಶ್ರೀಮತಿ ಕಲಾವತಿ ಕುಲಕರ್ಣಿ.
ಕೊಪ್ಪಳ.



Share this news

 Comments   0

Post your Comment

PEOPLE'S OPINION

Be the first person to comment this.

ಹೊಸ ಸುದ್ದಿಗಳು


Jul 10 2025 8:47PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಊರು ತೊರೆದು ಕಾಲುವೆಗೆ ಜಿಗಿದ ಪ್ರೇಮಿಗಳು
Jul 10 2025 8:13PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಊರು ತೊರೆದ - ಕಾಲುವೆಗೆ ಜಿಗಿದ ಪ್ರೇಮಿಗಳು
Jul 9 2025 7:45PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಗ್ರಾಮೀಣ ಅಂಚೆ ನೌಕರರಿಂದ ಕೊಪ್ಪಳದಲ್ಲಿ ಧರಣಿ
Jul 8 2025 9:55PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಹೆಚ್ಚು ಫಂಡ್ ತರುವ ಅನುಕೂಲ ಶತ್ರು ರಾಯರಡ್ಡಿ
Jul 8 2025 9:45PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಆಗಿನ ಹೆಲಿಕಾಪ್ಟರ್ ಗೆಳೆಯ ವಿರುದ್ದ ರಡ್ಡಿ ವಾಗ್ದಾಳಿ
Jul 6 2025 9:04AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಇನ್ನೂ 3 ವರ್ಷ ಐತಿ ರಸ್ತೆ ಮಾಡಿಸೋಣ : ರಾಯರಡ್ಡಿ
Jul 4 2025 8:57PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸಕ್ಕರೆ ಕಾರ್ಖಾನೆಗೆ ಎನ್ಓಸಿ ಕೊಡಬೇಡಿ : ಗ್ರಾಮಸ್ಥರ ಒತ್ತಾಯ
Jul 2 2025 9:14PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕರೆಂಟ್ ಕನೆಕ್ಷನ್ ಕಟ್ ಮಾಡಲು ಹೋದವರು ಕರೆಂಟ್ ಬಿಲ್ ಕಟ್ಟಿದರು
Jul 1 2025 8:01AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕಾಮಗಾರಿ ಗುತ್ತಿಗೆ ಹಿಟ್ನಾಳ್ ಕುಟುಂಬದ ಕಪಿಮುಷ್ಠಿಯಲ್ಲಿ : ಸಿವಿಸಿ
Jun 26 2025 11:48AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಗಂಗಾವತಿ ಇಂಜಿನಿಯರಿಂಗ್ ಕಾಲೇಜ್ ಕಳಪೆ ಕಾಮಗಾರಿ





     
Copyright © 2021 Agni Divya News. All Rights Reserved.
Designed & Developed by We Make Digitize