Advt. 
 Views   3658
Dec 13 2023 1:09PM

ರವಿಚಂದ್ರನ್ ಹೀರೊಯಿನ್ ನಿರ್ದೇಶಿಸಿದ ಸಿನಿಮಾ


ಕೊಪ್ಪಳ : ಇದು ಕೊಪ್ಪಳ ತಾಲೂಕಿನ ಬಿಸರಳ್ಳಿ ಮೂಲದ ಇಬ್ಬರು ಬಾಲಪ್ರತಿಭೆಗಳು ನಟಿಸಿದ ಸಿನಿಮಾ. ತಂದೆ ತಾಯಿ ಮಕ್ಕಳೊಂದಿಗೆ ನೋಡಬೇಕಾದ ಮಕ್ಕಳ ಸಿನಿಮಾ. ರವಿಚಂದ್ರನ್ ಹಿರೋಯಿನ್ ಅಪೂರ್ವ ನಿರ್ದೇಶಿಸಿದ ಸಿನಿಮಾ. ಬೆಂಗಳೂರು ಅಂತರ ರಾಷ್ಟ್ರೀಯ ಫಿಲಂ ಫೆಸ್ಟಿವಲ್ ನಲ್ಲಿ ಪ್ರಥಮ ಬಹುಮಾನ ಮತ್ತು ಅಪ್ಪು ಚಲನಚಿತ್ರೋತ್ಸವದಲ್ಲಿ ಉತ್ತಮ ನಿರ್ದೇಶಕ ಪ್ರಶಸ್ತಿ ಪಡೆದ ಸಿನಿಮಾ. 

ಇದುವೇ ' ಓ ನನ್ನ ಚೇತನ '  ಸಿನಿಮಾ !

ಇದೇ ಡಿ. 15 ರಂದು ರಾಜ್ಯಾದ್ಯಂತ ಮತ್ತು ಕೊಪ್ಪಳದ ಲಕ್ಷ್ಮೀ ಚಿತ್ರಮಂದಿರದಲ್ಲಿ ಬಿಡುಗಡೆ ಆಗುತ್ತಿದೆ. ಮೊಬೈಲ್ ಗೀಳಿಗೆ ಬಿದ್ದ ಮಕ್ಕಳ ಕಥಾ ಹಂದರದ ಸಿನಿಮಾ ಇದು.

ಬಿಸರಳ್ಳಿ ಮೂಲದ ಮಂಜುನಾಥ ಕೊಪ್ಪದ ಅವರ ಪುತ್ರ 7 ನೇ ತರಗತಿ ವಿದ್ಯಾರ್ಥಿ ಪ್ರತೀಕ್, ಇತನ ಅಣ್ಣ ಪ್ರಥಮ‌ ಪಿಯುಸಿ ಓದುತ್ತಿರುವ ಪ್ರತೀಕ್ ನಟಿಸಿರುವ ಸಿನಿಮಾ ಇದು.

ಪ್ರತೀಕ್ ಓ ನನ್ನ ಚೇತನ, ರಣಾಗ್ರ , ದರ್ಶನ ನಟನೆಯ ತಾರಕ್,  ಜೂನಿ ಸಿನಿಮಾದಲ್ಲಿ ನಟಿಸಿದ್ದಾನೆ.

ಪ್ರೀತಮ್ ಓ ನನ್ನ ಚೇತನ, ನಮ್ಮವರು, ಮಿಂಚು ಹುಳು, ಅಗನ್, ಐರಾವನ್ ಸಿನಿಮಾದಲ್ಲಿ ಹಾಗೂ ಅದಕ್ಕೂ ಮೊದಲು ಡ್ರಾಮಾ ಜೂನಿಯರ್ಸ್, ಅಗ್ನಿಸಾಕ್ಷಿ, ಗಿರಿಜಾ ಕಲ್ಯಾಣ ಧಾರಾವಾಹಿ ಹಾಗೂ ಕೆಲ ಕಿರುಚಿತ್ರಗಳಲ್ಲಿ ನಟಿಸಿದ್ದಾನೆ. 

ರವಿಚಂದ್ರನ್ ಅವರು ಬಹಳ ವರ್ಷಗಳ ಕಾಲ ಶ್ರಮ ಹಾಕಿ ಮಾಡಿದ್ದ 'ಅಪೂರ್ವ ' ಸಿನಿಮಾದ ನಾಯಕಿ ಅಪೂರ್ವ ಈ ' ಓ ನನ್ನ ಚೇತನ'  ಸಿನಿಮಾ ನಿರ್ದೇಶಕಿ.

ಮೊನ್ನೆ ಸೋಮವಾರ ಬೆಂಗಳೂರಿನಲ್ಲಿ ಓ ನನ್ನ ಚೇತನ ಸಿನಿಮಾ ಟ್ರೇಲರ್ ರವಿಚಂದ್ರನ್ ಬಿಡುಗಡೆಗೊಳಿಸಿದ್ದಾರೆ.
------------
ಬುಧವಾರ ಕೊಪ್ಪಳ ಮೀಡಿಯಾ ಕ್ಲಬ್ ನಲ್ಲಿ ಈ ಸಿನಿಮಾದ ಪೋಸ್ಟರ್ ಬಿಡುಗಡೆಗೊಳಿಸಿದ ಚಲನಚಿತ್ರ ಸಾಹಿತಿ ಡಾ. ಮಹಾಂತೇಶ ಮಲ್ಲನಗೌಡರ, ನಿರ್ದೇಶಕ ಬಸವರಾಜ ಕೊಪ್ಪಳ, ಪ್ರತೀಕ್,  ಪ್ರೀತಮ್ ಹಾಗೂ ಬಿಸರಳ್ಳಿ ಗ್ರಾ.ಪಂ ಅಧ್ಯಕ್ಷ ರವೀಂದ್ರಗೌಡ ಮಾಲಿಪಾಟೀಲ್ , ಮಂಜುನಾಥ ಅಂಗಡಿ, ಸುಧಾಕರ ಮುಜಗೊಂಡ ಇತರರು ನಮ್ಮ ಪ್ರತಿಭೆಗಳ ಈ ಸಿನಿಮಾ ಬೆಂಬಲಿಸುವಂತೆ ಮನವಿ ಮಾಡಿದರು.



Share this news

 Comments   0

Post your Comment

PEOPLE'S OPINION

Be the first person to comment this.

ಹೊಸ ಸುದ್ದಿಗಳು


Jul 12 2025 10:48PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಕರಡಿ ಪತ್ತೆಗಾಗಿ ಡ್ರೋನ್ ಬಳಕೆ
Jul 12 2025 9:05AM | ಜಿಲ್ಲಾ ಸುದ್ದಿಗಳು | ಕೊಪ್ಪಳ ರಾತ್ರಿ ಹೊಲಗಳಿಗೆ ಒಬ್ಬರೆ ಹೋಗಬೇಡಿ : ಅರಣ್ಯ ಇಲಾಖೆ
Jul 11 2025 8:58PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ರೈತನ ಮೇಲೆ ಕರಡಿ ದಾಳಿ
Jul 11 2025 8:03PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸಿಂಧನೂರು ಹುಬ್ಬಳ್ಳಿ ಸಿಂಧನೂರು ಪ್ಯಾಸೆಂಜರ್ ರೈಲು ಹೊಸ ವೇಳಾಪಟ್ಟಿ
Jul 11 2025 7:55PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಹುಬ್ಬಳ್ಳಿ ಮೂಲಕ ಬೆಂಗಳೂರಿಗೆ ಹೊಸ ರೈಲು
Jul 11 2025 10:33AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಊರು ತೊರೆದು ಹೋಗಿದ್ದ ಪ್ರೇಮಿಗಳು ಮರಳಿ ಬಾರದ ಊರಿಗೆ ಹೊರಟರು
Jul 10 2025 8:47PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಊರು ತೊರೆದು ಕಾಲುವೆಗೆ ಜಿಗಿದ ಪ್ರೇಮಿಗಳು
Jul 9 2025 7:45PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಗ್ರಾಮೀಣ ಅಂಚೆ ನೌಕರರಿಂದ ಕೊಪ್ಪಳದಲ್ಲಿ ಧರಣಿ
Jul 8 2025 9:55PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಹೆಚ್ಚು ಫಂಡ್ ತರುವ ಅನುಕೂಲ ಶತ್ರು ರಾಯರಡ್ಡಿ
Jul 8 2025 9:45PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಆಗಿನ ಹೆಲಿಕಾಪ್ಟರ್ ಗೆಳೆಯ ವಿರುದ್ದ ರಡ್ಡಿ ವಾಗ್ದಾಳಿ





     
Copyright © 2021 Agni Divya News. All Rights Reserved.
Designed & Developed by We Make Digitize