Advt. 
 Views   399

ಕೊಪ್ಪಳದಲ್ಲಿ ಸೌಹಾರ್ದ ಯುಗಾದಿ


ಸರ್ವ ಜನಾಂಗದ ತೋಟ ಎಂದೇ ಕವಿ ಕುವೆಂಪುರವರ ಕಾವ್ಯದಲ್ಲಿ ಬಣ್ಣಿಸಲ್ಪಟ್ಟಿದೆ ಕರ್ನಾಟಕ ರಾಜ್ಯ.

  ಇಂದು ಕೊಪ್ಪಳದ ತಾಲೂಕು ಕ್ರೀಡಾಂಗಣದಲ್ಲಿ  ಸೌಹಾರ್ದ ಯುಗಾದಿ ಆಚರಣೆ ಮಾಡಲಾಯಿತು. 

ಹಿಂದು ಮುಸ್ಲಿಂ ಸಮುದಾಯದವರು  ಸೇರಿ ಯುಗಾದಿಯ ಬೇವು ಬೆಲ್ಲವನ್ನು ಸವಿದರು. ನಾವೆಲ್ಲ ಭಾರತೀಯರು ನಮ್ಮ ಆಚರಣೆಗಳು ಏನೇ ಇರಲಿ ನಾವೆಲ್ಲ ಒಂದೇ,  ಮಾನವ ಧರ್ಮವೇ ಮುಖ್ಯ ಎಂದು ಸಾರಿದರು.


 ಕೊಪ್ಪಳದ ತಾಲೂಕಾ ಕ್ರೀಡಾಂಗಣದಲ್ಲಿ ಜೀವಪರ, ಜನಪರ ಸಂಘಟನೆಗಳು ಹಾಗು ಸೌಹಾರ್ದ ವೇದಿಕೆಯಿಂದ ಸೌಹಾರ್ದ ಯುಗಾದಿ ಆಚರಿಸಿದರು. ನೂರಾರು ಜನ ಹಿಂದು, ಮುಸ್ಲಿಂರ ಒಂದೆಡೆ ಸೇರಿ ಬೇವು ಬೆಲ್ಲವನ್ನು ಸವಿದು. ನಾವೆಲ್ಲ ಒಂದೇ ಎಂಬ ಸಂದೇಶವನ್ನು ಸಾರಿದರು. ಯುಗಾದಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ನಾಡಿನ ಸಂಸ್ಕೃತಿ ಒಗ್ಗಟ್ಟಿನಿಂದ ಕೂಡಿದೆ. ಇಲ್ಲಿ ಆಯಾಯ ಧರ್ಮದವರು ತಮ್ಮ ಆಚರಣೆಯನ್ನು ಮಾಡುತ್ತಾರೆ, ಬಹು ಸಂಸ್ಕೃತಿ , ಬಹು ಭಾಷೆ ಹೊಂದಿರುವ ದೇಶವಾಗಿದೆ. ಅವರವರ ಆಚರಣೆಯನ್ನು ಮಾಡಲು ಯಾವುದೇ ಅಡ್ಡಿ ಇಲ್ಲ. ಆಚರಣೆಗಳಿಂದ ಯಾರಿಗೂ ಹಾನಿ ಇಲ್ಲ ಆದರೆ ಈಗ ಬೇರೆ ಬೇರೆ ಕಾರಣಕ್ಕಾಗಿ ವಿವಾದ ಉಂಟಾಗಿದೆ, ಈ ವಿವಾದದಿಂದ ಜನರ ಮನಸ್ಸು ಕೆಡುತ್ತಿದೆ. ಮೊದಲಿನಿಂದ  ನಮ್ಮ ದೇಶವು ಸೌಹಾರ್ದಯುತವಾಗಿದೆ ಇದನ್ನೆ ಮುಂದುವರಿಸಿಕೊಂಡು ಹೋಗೋಣ ಎಂದರು.

   ಗುರುಗಳಾದ ಮಹ್ಮದ್ ಹೈದರ ಅಲಿ ಮಾತನಾಡಿ ನಾವೆಲ್ಲ ಭಾರತೀಯರು, ಭಾರತ ಮಾತೆಯ ನೆಲದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಬಾಳೋಣ. ನಮ್ಮ ನಮ್ಮ ಹಬ್ಬಗಳನ್ನು ಸೌಹಾರ್ದಯುತವಾಗಿ ಆಚರಿಸೋಣ, ಭಿನ್ನಾಭಿಪ್ರಾಯ ಬೇಡ ಎಲ್ಲರು ಒಂದೇ ತಾಯಿ ಮಕ್ಕಳಂತೆ ಬಾಳೋಣ ಎಂದು ಹೇಳಿದರು.



Share this news

 Comments   0

Post your Comment

PEOPLE'S OPINION

Be the first person to comment this.

ಹೊಸ ಸುದ್ದಿಗಳು


Jul 2 2025 9:14PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕರೆಂಟ್ ಕನೆಕ್ಷನ್ ಕಟ್ ಮಾಡಲು ಹೋದವರು ಕರೆಂಟ್ ಬಿಲ್ ಕಟ್ಟಿದರು
Jul 1 2025 8:01AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕಾಮಗಾರಿ ಗುತ್ತಿಗೆ ಹಿಟ್ನಾಳ್ ಕುಟುಂಬದ ಕಪಿಮುಷ್ಠಿಯಲ್ಲಿ : ಸಿವಿಸಿ
Jun 26 2025 11:48AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಗಂಗಾವತಿ ಇಂಜಿನಿಯರಿಂಗ್ ಕಾಲೇಜ್ ಕಳಪೆ ಕಾಮಗಾರಿ
Jun 25 2025 8:29PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳದಲ್ಲಿ ಅಭಿವೃದ್ದಿ ಏಕೆ ಮಾಯವಾಗಿದೆ ?
Jun 24 2025 4:58PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ನಮ್ಮ ಊರಿನ ಹತ್ರ ಸಕ್ಕರೆ ಫ್ಯಾಕ್ಟರಿ ಬೇಡ
Jun 24 2025 3:53PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕುಷ್ಟಗಿ : ವಸತಿ ಇಲಾಖೆಯಲ್ಲಿ ಲಂಚ ಆರೋಪ : ತನಿಖೆ ನಡೆಯಲಿ
Jun 23 2025 9:11AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಡಾ. ಬಸವರಾಜ ದಿಂಡೂರ ಅಭಿನಂದನಾ ಗ್ರಂಥ ಬಿಡುಗಡೆ
Jun 22 2025 1:35PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ತಪ್ಪಿದ ಭಾರಿ ಅನಾಹುತ
Jun 22 2025 9:25AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಖಬರಸ್ಥಾನ ಸ್ವಚ್ಚತೆ : ವಾಗ್ವಾದ
Jun 22 2025 9:17AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳದಲ್ಲಿ SDPI ಸಂಸ್ಥಾಪನಾ ದಿನಾಚರಣೆ : ರಕ್ತದಾನ ಶಿಬಿರ





     
Copyright © 2021 Agni Divya News. All Rights Reserved.
Designed & Developed by We Make Digitize