Advt. 
 Views   405

ಕೊಪ್ಪಳದಲ್ಲಿ ಸೌಹಾರ್ದ ಯುಗಾದಿ


ಸರ್ವ ಜನಾಂಗದ ತೋಟ ಎಂದೇ ಕವಿ ಕುವೆಂಪುರವರ ಕಾವ್ಯದಲ್ಲಿ ಬಣ್ಣಿಸಲ್ಪಟ್ಟಿದೆ ಕರ್ನಾಟಕ ರಾಜ್ಯ.

  ಇಂದು ಕೊಪ್ಪಳದ ತಾಲೂಕು ಕ್ರೀಡಾಂಗಣದಲ್ಲಿ  ಸೌಹಾರ್ದ ಯುಗಾದಿ ಆಚರಣೆ ಮಾಡಲಾಯಿತು. 

ಹಿಂದು ಮುಸ್ಲಿಂ ಸಮುದಾಯದವರು  ಸೇರಿ ಯುಗಾದಿಯ ಬೇವು ಬೆಲ್ಲವನ್ನು ಸವಿದರು. ನಾವೆಲ್ಲ ಭಾರತೀಯರು ನಮ್ಮ ಆಚರಣೆಗಳು ಏನೇ ಇರಲಿ ನಾವೆಲ್ಲ ಒಂದೇ,  ಮಾನವ ಧರ್ಮವೇ ಮುಖ್ಯ ಎಂದು ಸಾರಿದರು.


 ಕೊಪ್ಪಳದ ತಾಲೂಕಾ ಕ್ರೀಡಾಂಗಣದಲ್ಲಿ ಜೀವಪರ, ಜನಪರ ಸಂಘಟನೆಗಳು ಹಾಗು ಸೌಹಾರ್ದ ವೇದಿಕೆಯಿಂದ ಸೌಹಾರ್ದ ಯುಗಾದಿ ಆಚರಿಸಿದರು. ನೂರಾರು ಜನ ಹಿಂದು, ಮುಸ್ಲಿಂರ ಒಂದೆಡೆ ಸೇರಿ ಬೇವು ಬೆಲ್ಲವನ್ನು ಸವಿದು. ನಾವೆಲ್ಲ ಒಂದೇ ಎಂಬ ಸಂದೇಶವನ್ನು ಸಾರಿದರು. ಯುಗಾದಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ನಾಡಿನ ಸಂಸ್ಕೃತಿ ಒಗ್ಗಟ್ಟಿನಿಂದ ಕೂಡಿದೆ. ಇಲ್ಲಿ ಆಯಾಯ ಧರ್ಮದವರು ತಮ್ಮ ಆಚರಣೆಯನ್ನು ಮಾಡುತ್ತಾರೆ, ಬಹು ಸಂಸ್ಕೃತಿ , ಬಹು ಭಾಷೆ ಹೊಂದಿರುವ ದೇಶವಾಗಿದೆ. ಅವರವರ ಆಚರಣೆಯನ್ನು ಮಾಡಲು ಯಾವುದೇ ಅಡ್ಡಿ ಇಲ್ಲ. ಆಚರಣೆಗಳಿಂದ ಯಾರಿಗೂ ಹಾನಿ ಇಲ್ಲ ಆದರೆ ಈಗ ಬೇರೆ ಬೇರೆ ಕಾರಣಕ್ಕಾಗಿ ವಿವಾದ ಉಂಟಾಗಿದೆ, ಈ ವಿವಾದದಿಂದ ಜನರ ಮನಸ್ಸು ಕೆಡುತ್ತಿದೆ. ಮೊದಲಿನಿಂದ  ನಮ್ಮ ದೇಶವು ಸೌಹಾರ್ದಯುತವಾಗಿದೆ ಇದನ್ನೆ ಮುಂದುವರಿಸಿಕೊಂಡು ಹೋಗೋಣ ಎಂದರು.

   ಗುರುಗಳಾದ ಮಹ್ಮದ್ ಹೈದರ ಅಲಿ ಮಾತನಾಡಿ ನಾವೆಲ್ಲ ಭಾರತೀಯರು, ಭಾರತ ಮಾತೆಯ ನೆಲದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಬಾಳೋಣ. ನಮ್ಮ ನಮ್ಮ ಹಬ್ಬಗಳನ್ನು ಸೌಹಾರ್ದಯುತವಾಗಿ ಆಚರಿಸೋಣ, ಭಿನ್ನಾಭಿಪ್ರಾಯ ಬೇಡ ಎಲ್ಲರು ಒಂದೇ ತಾಯಿ ಮಕ್ಕಳಂತೆ ಬಾಳೋಣ ಎಂದು ಹೇಳಿದರು.



Share this news

 Comments   0

Post your Comment

PEOPLE'S OPINION

Be the first person to comment this.

ಹೊಸ ಸುದ್ದಿಗಳು


Jul 11 2025 8:58PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ರೈತನ ಮೇಲೆ ಕರಡಿ ದಾಳಿ
Jul 11 2025 8:03PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸಿಂಧನೂರು ಹುಬ್ಬಳ್ಳಿ ಸಿಂಧನೂರು ಪ್ಯಾಸೆಂಜರ್ ರೈಲು ಹೊಸ ವೇಳಾಪಟ್ಟಿ
Jul 11 2025 7:55PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಹುಬ್ಬಳ್ಳಿ ಮೂಲಕ ಬೆಂಗಳೂರಿಗೆ ಹೊಸ ರೈಲು
Jul 11 2025 10:33AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಊರು ತೊರೆದು ಹೋಗಿದ್ದ ಪ್ರೇಮಿಗಳು ಮರಳಿ ಬಾರದ ಊರಿಗೆ ಹೊರಟರು
Jul 10 2025 8:47PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಊರು ತೊರೆದು ಕಾಲುವೆಗೆ ಜಿಗಿದ ಪ್ರೇಮಿಗಳು
Jul 9 2025 7:45PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಗ್ರಾಮೀಣ ಅಂಚೆ ನೌಕರರಿಂದ ಕೊಪ್ಪಳದಲ್ಲಿ ಧರಣಿ
Jul 8 2025 9:55PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಹೆಚ್ಚು ಫಂಡ್ ತರುವ ಅನುಕೂಲ ಶತ್ರು ರಾಯರಡ್ಡಿ
Jul 8 2025 9:45PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಆಗಿನ ಹೆಲಿಕಾಪ್ಟರ್ ಗೆಳೆಯ ವಿರುದ್ದ ರಡ್ಡಿ ವಾಗ್ದಾಳಿ
Jul 6 2025 9:04AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಇನ್ನೂ 3 ವರ್ಷ ಐತಿ ರಸ್ತೆ ಮಾಡಿಸೋಣ : ರಾಯರಡ್ಡಿ
Jul 4 2025 8:57PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸಕ್ಕರೆ ಕಾರ್ಖಾನೆಗೆ ಎನ್ಓಸಿ ಕೊಡಬೇಡಿ : ಗ್ರಾಮಸ್ಥರ ಒತ್ತಾಯ





     
Copyright © 2021 Agni Divya News. All Rights Reserved.
Designed & Developed by We Make Digitize